ಬಿರುಗಾಳಿ

ನೋವಿನ ಬಿರುಗಾಳಿ
ಬಾಳಲಿ ಬೀಸುತಲಿ
ಬರೆ ನೀಡುತ…
ಬಡಿದು-ನೋಯಿಸುತ
ತನು-ಮನ ಕಲುಕುತಿಹದು
ಪ್ರತಿಭೆ-ಪ್ರಸನ್ನತೆಗಳ
ಭ್ರಮನಿರಸನದ ಆದರ್ಶ
ಬವಣೆಯಲಿ ಬಳಲುತಿಹದು

ಅನಾಚಾರ… ಕಂದಾಚಾರ
ರಾರಾಜಿಸುತ… ರಂಜನೆಯಲಿ
ಎಲ್ಲೆಡೆ ಹರಡಿಹವು
ಏಕನಾದದಿ ಮಿಡಿಯುತ
ಮಾರಕ ಯಾತನೆಯಲಿ
ಗಹ… ಗಹಿಸುತಿಹವು

ಸುಪ್ತ ಮನಸ್ಸುಗಳ
ಆಳದಿ ತುಂಬಿ…
ಬದುಕಿನ ಪ್ರಶ್ನೆಗಳೇ…
ಕೇಳುತಲಿ ಹಲವು
ಜೀವಂತ ಹೆಣವಾಗಿಸುವ
ಹುನ್ನಾರದಿ ಆತ್ಮ ಸ್ಥೈರ್ಯ
ಅಂತರಾಳದಿ ಎಚ್ಚರಗೊಳಿಸುತಿಹವು

ಏಳಬೇಕು… ಎಚ್ಚರದಿ
ಎದ್ದೇಳಬೇಕು… ಮನಸ್ಸು
ಆತ್ಮ – ಗುಂಡಾಗಿಸಿ…
ಸಿಡಿಯುತಲಿ ಉರುಳಬೇಕು
ಕತ್ತಲೆ ಸೀಳುವ ಮಿಂಚಾಗಿ
ದೀವಿಗೆಯ ಬೆಂಕಿ ಬೆಳಕಾಗುತ

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀರೆಂದರೆ
Next post ಹೌದಪ್ಪ ಹೌದೋ ನೀನೇ ದೇವರಾ

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys